ಶ್ರೀ ಕನಕ ಫಿಲಂ ಲಾಂಛನದಲ್ಲಿ ಬಿಎನ್. ಗುರುರಾಜ್ ನಿರ್ಮಾಣದ ನಟೋರಿಯಸ್ ಚಿತ್ರಕ್ಕೆ ದಿಕ್ಲಬ್ನಲ್ಲಿ ಮಿಣಮಿಣ ಕಣ್ಗಳಲ್ಲಿ ತರತರ ಆನ೦ದದಲ್ಲಿ ಎಂಬ ಹಾಡಿಗೆ ರಾಕೇಶ್, ರಮ್ಯಬಾರ್ನಾ, ನೃತ್ಯಗಾರರು ಸಹಕಲಾವಿದರುಗಳು ಪಾಲ್ಗೊಂಡಿದ್ದ ಹಾಡಿನ ಚಿತ್ರೀಕರಣ ಚಂದ್ರಶೇಖರ್ ರೆಡ್ಡಿ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಣವಾಯಿತು. ಯು.ಗೋವಿಂದೇಗೌಡ ನಿರ್ದೇಶಿಸುತ್ತಿರುವ ಈ ಚಿತ್ರದ ಛಾಯಾಗ್ರಹಣ -ಧನುಶ್, ಸಂಗೀತ - ಪ್ರಭು.ಎಸ್.ಆರ್, ಸಾಹಸ- ವೆ೦ಕಟ್, ನೃತ್ಯ - ಮುರಳಿ, ಚಂದ್ರಶೇಖರ್ ರೆಡ್ಡಿ, ಮದನ್ ಹರಿಣಿ, ಸಹನಿರ್ದೇಶನ - ರಾಜು ದೇವಸಂಧ್ರ, ಸೂರ್ಯ ಸತೀಶ್, ನಿರ್ಮಾಣ-ನಿರ್ವಹಣೆ- ಸಫೈರ್ ರವಿ, ಪ್ರಭಾಕರ್ - ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ರಾಕೇಶ್, ರಮ್ಯಬಾರ್ನಾ, ಸಾಧುಕೋಕಿಲ, ರಾಜು ತಾಳಿಕೋಟೆ, ಓಂ ಪ್ರಕಾಶ್ರಾವ್, ನಾಗೇಂದ್ರ ಅರಸ್, ರವಿ ಚೇತನ್, ಸುಚಿಂದ್ರ ಪ್ರಸಾದ್, ಅಪೂರ್ವ, ವಾಣಿಶ್ರೀ, ಶರವಣ, ರವಿ, ನವೀನ್ ಮಾರುತಿ, ವಿನೋದ್, ರಶ್ಮಿತ ಹಾಗೂ ಸಿಮ್ರಾನ್ ಖಾನ್ ಅಭಿನಯಿಸಿದ್ದಾರೆ.